Skip to main content

Posts

Showing posts from February, 2026

ನೈದಿಲೆ

ನೈದಿಲೆ  ಕೆಸರು ಮೆತ್ತುವುದಿಲ್ಲ, ನೀರು ನಿಲ್ಲುವುದಿಲ್ಲ ಅದಕ್ಕೇನು ಅಂಟುವುದೂ ಇಲ್ಲ. ನಿರ್ಲಿಪ್ತ ಹೂವದು, ಕಮಲ. ಹನಿಬಿಂದುವೂ ನಿಲ್ಲುವುದಿಲ್ಲ, ದಳದ ಮೇಲೆ. ನೀರ ಮಧ್ಯದ ನೈದಿಲೆ. ಸಂತೆಯಲ್ಲೂ ನೀರವವಿದೆ, ಜಾತ್ರೆಯಲ್ಲೂ. ಸಂತೆಯ ಸದ್ದು ಕೇಳಬೇಕಿಲ್ಲ, ಜಾತ್ರೆಯ ಸದ್ದೂ.

ಕೃತ್ರಿಮ

ಕೃತ್ರಿಮ  ಎಲ್ಲವೂ ಕೃತ್ರಿಮ. ಗದ್ದಲವಿಲ್ಲದಿರುವುದೂ! ಒಂದು ಸಂಚು. ಒಂದು ಹೊಂಚು. ನೀರವದ ಮಧ್ಯಯೂ ಸಂಚಿನ ಕಮಟು. ಎಲ್ಲವೂ ಕೃತ್ರಿಮ, ಎಲೆ ಬೀಳುವುದು, ಎಳೆ ಬಿಡಿಸುವುದು. ಮೌನದ ಮಧ್ಯವೂ ಹೊಂಚಿನ ಕಿಡಿ. ಎಲ್ಲವೂ ಕೃತ್ರಿಮ. ಕುಡಿಯುವ ನೀರೂ, ಆವರಿಸಿದ ಬೇರೂ. ನಂಬಿಕೆಯಿಲ್ಲ ಗದ್ದಲದ ಮೇಲೂ, ನೀರವದ ಮೇಲೂ. ಉಮಾರಾಣಿ ಪೂಜಾರ 

ಜೀವ ಚೈತನ್ಯ

ಜೀವ ಚೈತನ್ಯ  ನಿನ್ನ ರೆಕ್ಕೆಗಳನ್ನು ನೀನೆ  ಬೆಳೆಸಿಕೊಳ್ಳಬೇಕು. ನಿನ್ನ ಹೂವುಗಳನ್ನು  ನೀನೇ ಅರಳಿಸಬೇಕು. ನೀನು ನೀರು  ಹಾಕುತ್ತಿರಬೇಕು, ತನುಮನದ  ವೃಕ್ಷಕ್ಕೆ. ಅದುವೇ  ಜೀವ ಚೈತನ್ಯ. ನೀನು ತಾಳಬೇಕು  ಹೊಸ ಸಂವತ್ಸರ. ನೀ ಪಡೆಯಬೇಕು  ಹೊಸ ಮನ್ವಂತರ. ನೀ ಆಗಬೇಕು  ಮತ್ತೆ ರೂಪಾಂತರ. ಚೈತನ್ಯ  ತಳೆಯಬೇಕು ನೀ. ಅನವರತ ಹೊಳೆಯುತ್ತಿರಬೇಕು ನೀ. ಎಲೆಲೆ ಮಾನಿನಿ, ಕ್ಷೀಣಿಸದಿರಲಿ  ನಿನ್ನ ಧ್ವನಿ. ಜೀವ ಚೈತನ್ಯ ನೀ.

ನಿನ್ನೊಳು ಮರವೇ

ನಿನ್ನೊಳು ಮರವೇ ಮುದ್ದೆ ತಿರುವುವ ಕೈಗಳು, ಕೈಗಳಲ್ಲ ಅವು ಮರದ ಕೊಂಬೆ. ಖಾರ ಉದುರಿಸುವ ಕೈ ಬೆರಳುಗಳು, ಕೈ ಬೆರಳಲ್ಲ ಅವು ಮರದ ಟೊಂಗೆ. ಒಲೆಗೆ ಬಾಗಿ ಕುಳಿತ ಶರೀರ. ಶರೀರವಲ್ಲ ಅದು ಹೆಮ್ಮರ. ಅಲುಗಾಡುತ್ತಿರುವ ಕಾಲ್ಬೆರಳು. ಕಾಲ್ಬೆರಳಲ್ಲ ಅವು ಚಲಿಸುವ ಬೇರುಗಳು. ಓ ಮಾನಿನಿ ನಿನ್ನೊಳು ಮರವೇ. ನೀನೇ ಮರವೇ.

ಓ ಸಖಿ

  ಓ ಸಖಿ  ಓ ಸಖಿ ನಿನ್ನ ಕಾಲಡಿಯ ಮಣ್ಣು ಬರೀ ಮಣ್ಣಲ್ಲ, ಪ್ರಕೃತಿಯ ವಿಭೂತಿ. ಓ ಸಖಿ, ನೀನು ಕಾಲಿಟ್ಟಲ್ಲೆಲ್ಲ ಅಂತರಜಲ. ಅದು ಬರೀ ಅಂತರ್ಜಲವಲ್ಲ, ಶುದ್ಧ ತೀರ್ಥ. ಓ ಸಖಿ ನಿನಗೆ ಕೇಳುವುದೇಲ್ಲ, ಕಾಡಿನ ಮರ್ಮರಗಳು ಅದು ಬರೀ ಸದ್ದಲ್ಲ ಕಾಡ ಪೂಜೆಯ ನಾದ. ಓ ಸಖಿ ನಿನ್ನ ಹಿಡಿದಿಟ್ಟಿವೆ ಸಾವಿರಾರು ಬೇರುಗಳು. ತಲೆತುಂಬ ಸುಗಂಧದ ಹೂಗಳು. ಓ ಸಖಿ, ನೀನು ಚಲಿಸುವ ಬನವೇ? ನೀನೇ ವನವೇ? ನಿರಂತರ ಭೋರ್ಗರೆವ ಶರಧಿ ನೀನು. ಉಮಾರಾಣಿ ಪೂಜಾರ 

ಸ್ತ್ರೀವಾದ (ಹೊಸ ಪ್ರಕಟಣೆ )

 📖 STRIVADA ✍️ Author: Uma Rani Pujar 📌 ISBN: 978-93-7020-090-6 📦 Order Now: 🔹 Amazon: https://www.amazon.in/dp/9370200908 🔹 Flipkart: https://www.flipkart.com/product/p/itme?pid=9789370200906 🔹 IIP Store: https://iipbooks.com/authors/uma-rani-pujar-5464 🔹 Google Books: https://books.google.co.in/books/about?id=O7igEQAAQBAJ&redir_esc=y 📚 Published by Iterative International Publishers #IIPBooks #WasteManagement #UrbanDevelopment #Sustainability #EnvironmentalStudies #ಅಕಾಡೆಮಿಕಬುಕ್ಸ್