ಬಂದಿದೆ ನವ ಸಂಕ್ರಾಂತಿ, ತರಲಿ ಎಲ್ಲರ ಬಾಳಿಗೆ ಸುಖಶಾಂತಿ, ಸರ್ವರ ಮೊಗದಲ್ಲಿ ಮೂಡಲಿ ಕಾಂತಿ ; ಆಗಲಿ ಹಳೆಯ ರಾಗದ್ವೇಷಗಳ ವಾಂತಿ. ಅಂತರಿಕ್ಷದಲ್ಲಿ ಸೂರ್ಯನ ಸ್ಥಾನಪಲ್ಲಟ; ಸಂಕ್ರಾಂತಿ ಹಬ್ಬ ಕಣ್ಣಿಗೆ ಸುಂದರ ನೋಟ. ಚಿಣ್ಣರು ಖುಷಿಯಲಿ ಹಾರಿಸುವರು ಗಾಳಿಪಟ, ಅಡುಗೆಮನೆಯಲ್ಲಿ ತಯಾರಾಗುವುದು ಹಬ್ಬದೂಟ. ಸುತ್ತಲೂ ಮಾಗಿಯ ಚಳಿ ; ಆಗಾಗ ಬೀಸುವ ಥಂಡಿ ಗಾಳಿ. ಕಬ್ಬಿನ ಸಿಹಿ ಸವಿಯುವುದು ; ಹೊಸ ಬಟ್ಟೆಯ ಧರಿಸುವುದು. ಎಳ್ಳು ಬೆಲ್ಲ ನೀಡಲಿ ಬಾಳಿಗೆ ಸಿಹಿ, ದೂರವಾಗಲಿ ಎಲ್ಲ ನೋವಿನ ಕಹಿ. ಬೇಕಾಗಿವೆ ಒಳ್ಳೆ ಶುಭ ಹಾರೈಕೆಗಳು ; ದೂರವಾಗಲಿ ಕೊಂಕು ಸುಳ್ಳುಮಾತುಗಳು. ಎಳ್ಳು ಬೆಲ್ಲವನ್ನು ಹಂಚೋಣ, ಒಳ್ಳೆ ಮಾತಾಡೋಣ, ದ್ವೇಷ ಹಗೆತನವನ್ನು ಅಳಿಸೋಣ, ಪ್ರತಿಕ್ಷಣವನ್ನು ಸಂತೋಷದಿಂದ ತುಂಬಿಸೋಣ. ಉಮಾರಾಣಿ ಪೂಜಾರ
ಕವಯತ್ರಿ | ಲೇಖಕಿ | ಕಥೆಗಾರ್ತಿ | ಕಾದಂಬರಿಕಾರ್ತಿ | ಬ್ಲಾಗರ್ "ಸ್ತ್ರೀವಾದ", "ಓ ಸಖಿ", "Cherry Blossom", “ಪ್ರೀತಿ ಎಂದರೇನು?”, “ವಸಂತದ ಸೊಬಗು”, “ರೋಧನೆ”, “ನಿನಾದ”, ಹಾಗೂ "ಮನ್ವಂತರ" ಉಮಾರಾಣಿ ಪೂಜಾರ ಅವರ ಪ್ರಮುಖ ಕೃತಿಗಳು. ಹನ್ನೆರಡು ಕಥೆಗಳನ್ನು ಹೊಂದಿದ "ಚಪ್ಪಾಳೆಗಳ ನಡುವಿನ ಏಕಾಂತ" ಅವರ ಕಥಾ ಸಂಕಲನ. ಪ್ರಸ್ತುತ “ನಾಗಬನ” ಎಕೋ-ಫೆಮಿನಿಸ್ಟ್ ಕಾದಂಬರಿ ಪ್ರಕಟಣಾ ಹಂತದಲ್ಲಿದೆ. ಅವರು ಕರ್ನಾಟಕ ಸಾಹಿತ್ಯ ಸೇವಾಸಿರಿ ಪ್ರಶಸ್ತಿ ಮತ್ತು 2026ರ Universal Icon Women Achievers Award ಪುರಸ್ಕೃತರು.